Satyameva Jayate - By - Shankar Mahadev Bidari
ಶಂಕರ ಮಹಾದೇವ ಬಿದರಿ ಇವರು ದೇಶ ಕಂಡ ಅತ್ಯಂತ ದಕ್ಷ ಮತ್ತು ಸಾಹಸಿ ಪೊಲೀಸ್ ಅಧಿಕಾರಿ. “ಸತ್ಯಮೇವ ಜಯತೇ” ಇದು ಬಿದರಿಯವರ ಆತ್ಮಚರಿತ್ರೆ. ತಮ್ಮ ಜೀವನ ಸಾಗಿ ಬಂದ ದಾರಿಯನ್ನು ತುಂಬಾ ಸರಳವಾಗಿ ಮತ್ತು ನೇರವಾಗಿ ಬರೆದಿದ್ದಾರೆ. ಇಲ್ಲಿ ಯಾವುದೇ ಕಲ್ಪನೆ ಅಥವಾ ವರ್ಣನೆ ಇಲ್ಲ.
ಕೇವಲ ಪಿ.ಯು.ಸಿವರೆಗೆ ವಿದ್ಯಾಭ್ಯಾಸ ಮಾಡಿ, ಜೀವನೋಪಾಯಕ್ಕೆ ಕೆಲಸ ಪ್ರಾರಂಭಿಸಿದ ಮೇಲೆ, ಬಾಹ್ಯ ವಿದ್ಯಾರ್ಥಿಯಾಗಿ, ಯಾವುದೇ ಮಾರ್ಗದರ್ಶನವಿಲ್ಲದೆ, ಪದವೀಧರರಾಗಿ, ರಾಜ್ಯದಲ್ಲಿ ಅಸಿಸ್ಟೆಂಟ್ ಕಮೀಷನರ್ರಾಗಿ ಆಯ್ಕೆಯಾದವರು. ಅಷ್ಟಕ್ಕೆ ತೃಪ್ತರಾಗದೇ ಭಾರತೀಯ ಪೋಲಿಸ್ ಸೇವೆಗೆ ಸೇರಿದವರು.
ವೃತ್ತಿ ಜೀವನದಲ್ಲಿ ಪ್ರತಿಯೊಂದು ಹುದ್ದೆಯನ್ನು ಬಂದು ಅವಕಾಶವಾಗಿ ಸ್ವೀಕರಿಸಿ, ಉತ್ಸಾಹ, ಸೇವಾ ಮನೋಭಾವ ಮತ್ತು ಸಾಹಸದಿಂದ ನಿರ್ವಹಿಸದವರು. ಎಲ್ಲಾ ಅಡೆತಡೆಗಳು ಮತ್ತು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ನೇರ ಮಾರ್ಗದಲ್ಲಿ ಮುನ್ನುಗಿದ್ದವರು.
ತಮ್ಮ ಕಾರ್ಯ ತತ್ಪರತೆ, ಸೇವಾ ಮನೋಭಾವ, ಪರಿಶ್ರಮಪೂರ್ವಕವಾದ ದುಡಿಮೆ ಮತ್ತು ಧೈರ್ಯ ಸಾಹಸಗಳಿಂದ ಸರ್ಕಾರಗಳ ಮತ್ತು ಸಾರ್ವಜನಿಕರ ಪ್ರಶಂಸೆ ಮತ್ತು ಮನ್ನಣೆ ಪಡೆದವರು.
ಕರ್ನಾಟಕ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಎರಡನೇ ಬಾರಿ ಪಡೆದ ಪ್ರಥಮ ಪೊಲೀಸ್ ಅಧಿಕಾರಿ. ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಶೌರ್ಯ ಪದಕವನ್ನು ಪಡೆದ ಪ್ರಥಮ ಹೊರ ರಾಜ್ಯದ ಪೊಲೀಸ್ ಅಧಿಕಾರಿ.
ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕವನ್ನು ಎರಡನೆಯ ಬಾರಿಗೆ ಪಡೆದ ಕರ್ನಾಟಕದ ಪ್ರಥಮ ಪೊಲೀಸ್ ಅಧಿಕಾರಿ.
ಭಾರತ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತದ ನಗದು ಬಹುಮಾನ ಪಡೆದ ಪೊಲೀಸ್ ಅಧಿಕಾರಿ. ಅವರ ವೃತ್ತಿ ಜೀವನದ ಸಾಹಸಗಾಥೆಯೇ “ಸತ್ಯಮೇವ ಜಯತೇ”, ಇದು ಎಲ್ಲರಿಗೂ ಸ್ಪೂರ್ತಿದಾಯಕ ಕೃತಿ ಎಂದು ನನ್ನ ಅಚಲ ನಂಬಿಕೆ.
About the book
ಶಂಕರ ಮಹಾದೇವ ಬಿದರಿ ಇವರು ದೇಶ ಕಂಡ ಅತ್ಯಂತ ದಕ್ಷ ಮತ್ತು ಸಾಹಸಿ ಪೊಲೀಸ್ ಅಧಿಕಾರಿ. “ಸತ್ಯಮೇವ ಜಯತೇ” ಇದು ಬಿದರಿಯವರ ಆತ್ಮಚರಿತ್ರೆ. ತಮ್ಮ ಜೀವನ ಸಾಗಿ ಬಂದ ದಾರಿಯನ್ನು ತುಂಬಾ ಸರಳವಾಗಿ ಮತ್ತು ನೇರವಾಗಿ ಬರೆದಿದ್ದಾರೆ. ಇಲ್ಲಿ ಯಾವುದೇ ಕಲ್ಪನೆ ಅಥವಾ ವರ್ಣನೆ ಇಲ್ಲ.
ಕೇವಲ ಪಿ.ಯು.ಸಿವರೆಗೆ ವಿದ್ಯಾಭ್ಯಾಸ ಮಾಡಿ, ಜೀವನೋಪಾಯಕ್ಕೆ ಕೆಲಸ ಪ್ರಾರಂಭಿಸಿದ ಮೇಲೆ, ಬಾಹ್ಯ ವಿದ್ಯಾರ್ಥಿಯಾಗಿ, ಯಾವುದೇ ಮಾರ್ಗದರ್ಶನವಿಲ್ಲದೆ, ಪದವೀಧರರಾಗಿ, ರಾಜ್ಯದಲ್ಲಿ ಅಸಿಸ್ಟೆಂಟ್ ಕಮೀಷನರ್ರಾಗಿ ಆಯ್ಕೆಯಾದವರು. ಅಷ್ಟಕ್ಕೆ ತೃಪ್ತರಾಗದೇ ಭಾರತೀಯ ಪೋಲಿಸ್ ಸೇವೆಗೆ ಸೇರಿದವರು.
ವೃತ್ತಿ ಜೀವನದಲ್ಲಿ ಪ್ರತಿಯೊಂದು ಹುದ್ದೆಯನ್ನು ಬಂದು ಅವಕಾಶವಾಗಿ ಸ್ವೀಕರಿಸಿ, ಉತ್ಸಾಹ, ಸೇವಾ ಮನೋಭಾವ ಮತ್ತು ಸಾಹಸದಿಂದ ನಿರ್ವಹಿಸದವರು. ಎಲ್ಲಾ ಅಡೆತಡೆಗಳು ಮತ್ತು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ನೇರ ಮಾರ್ಗದಲ್ಲಿ ಮುನ್ನುಗಿದ್ದವರು.
ತಮ್ಮ ಕಾರ್ಯ ತತ್ಪರತೆ, ಸೇವಾ ಮನೋಭಾವ, ಪರಿಶ್ರಮಪೂರ್ವಕವಾದ ದುಡಿಮೆ ಮತ್ತು ಧೈರ್ಯ ಸಾಹಸಗಳಿಂದ ಸರ್ಕಾರಗಳ ಮತ್ತು ಸಾರ್ವಜನಿಕರ ಪ್ರಶಂಸೆ ಮತ್ತು ಮನ್ನಣೆ ಪಡೆದವರು.
ಕರ್ನಾಟಕ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಎರಡನೇ ಬಾರಿ ಪಡೆದ ಪ್ರಥಮ ಪೊಲೀಸ್ ಅಧಿಕಾರಿ. ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಶೌರ್ಯ ಪದಕವನ್ನು ಪಡೆದ ಪ್ರಥಮ ಹೊರ ರಾಜ್ಯದ ಪೊಲೀಸ್ ಅಧಿಕಾರಿ.
ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕವನ್ನು ಎರಡನೆಯ ಬಾರಿಗೆ ಪಡೆದ ಕರ್ನಾಟಕದ ಪ್ರಥಮ ಪೊಲೀಸ್ ಅಧಿಕಾರಿ.
ಭಾರತ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತದ ನಗದು ಬಹುಮಾನ ಪಡೆದ ಪೊಲೀಸ್ ಅಧಿಕಾರಿ. ಅವರ ವೃತ್ತಿ ಜೀವನದ ಸಾಹಸಗಾಥೆಯೇ “ಸತ್ಯಮೇವ ಜಯತೇ”, ಇದು ಎಲ್ಲರಿಗೂ ಸ್ಪೂರ್ತಿದಾಯಕ ಕೃತಿ ಎಂದು ನನ್ನ ಅಚಲ ನಂಬಿಕೆ.
Book specifications
ISBN:9789354562273
Language: Kannada
Author/Translator:Shankar Bidari
Binding: Hard Bond
Publisher: Shankar Bidari
Publishing Date: 2022
Edition : 1st
Total Pages: 746
Size: 1/4th Royal